ಮುದ್ದು ಕಂದನ ವಚನಗಳು: ಎರಡು

ಶಿವಯೋಗ
ಕೂಸು ತಾಯಿಯ ಕಂಡು ಕುಲುಕುಲನೆ ನಕ್ಕಂತೆ
ಯೋಗವೆಂಬುದು ಚಂದ ಚಲುವ ಬಂಧ
ತಾಯ ಎದೆ ಹಾಲನ್ನು ಗಟಗಟನೆ ಕುಡಿದಂತೆ
ಶಿವಯೋಗದಾನಂದ ಮುದ್ದುಕಂದ

ಬಣ್ಣ
ಮಾವೀನ ಮರಕಂಡು ಗಾನ ಮಾಡುವರಿಲ್ಲ
ಕಲ್ಲೊಗೆದು ಹರಿದೊಯ್ವ ಕಳ್ಳರಿಹರು
ನೀನು ಸುಂದರ ಮಾವು, ನೀನು ಸುಂದರ ಗೋವು
ಬಣ್ಣ ನಂಬಲು ಬೇಡ ಮುದ್ದುಕಂದ

ಮನೆ
ಚಂದ ಕಟ್ಟಿದ ಮನೆಗೆ ಚಂದ ಚಂದದ ಹೆಸರು
ಚಂದನದ ಚಲುವೀನ ಚಿತ್ರನಕ್ಷೆ
ಚಂದ ಜಾರಿದ ಮನೆಯ ಚಂದನವೆ ಕಾಕುಳ್ಳು
ಇಂದ್ರ ಭವನವೆ ಇದ್ಲಿ ಮುದ್ದುಕಂದ

ಆರೋಗ್ಯ
ಬಾಯ್ಗೆ ಹಲ್ಲಿನ ಸೆಟ್ಟು ಕಣ್ಗೆ ಕಾಜಿನ ಕಟ್ಟು
ಹಡಿಯಾಕ ಸಿಜರಿನ್ನು ಮೆಟ್ಟಾಯಿತು
ಹತ್ತೀಯ ಹೊಲದಾಗ ದುಡಕೊಂತ ಹಡದಾಕಿ
ನಡಕೊಂತ ಬಂದಾಳ ಮುದ್ದುಕಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೆ ಸೀತಾಯಣದ ನೆನಪು ಕೆದಕಿ
Next post ಮುಂಗಾರು

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys